Monday 28 September 2015

Veil

My first translation attempt...  
English translated version of my short story "Tere", published in "Readoo kannada"..

Veil

"So.. what next ?? ... ", I asked Kshama sipping coffee. She was absorbed in greenery of the institute. She talked... Her voice came to me as a whisper of standing lush green trees echoed by sleeping mountains. "Lets see... I want to go abroad .... " , she trembled as she uttered these words. It was as though, she was in search of something which was lost since ages. " I have asked my prof... for reco letter,... ", she resentfully remembered her work, which had gulped her from an year and half. Those eyes... which I saw an year back ...those impish eyes... were in search of some divine thing which, probably, didn't exist in the world in which I lived. Her voice had lost that ebullience it possessed, the warmth it encompassed.  ' Is it the same Kshama ...  whom I wanted ... ?? ' ... thoughts started to rush up and fill my mind. " What is this.... ??? ...  gown !!!! ", she laughed impishly as she spoke. Those words caught my immediate attention and I looked her, thinking her voice retook her usual path. She kept on staring my eyes having a packet of wafers in her hand. She slowly, effortlessly took a piece and pressed it on her shiny lips. I replied, " I don't like this flavour ... ", unknowingly English peeped in our conversation. It generated odium in me, for me, probably, trying to attract her. She may not understand this. But I felt, I am drowning in the same old trifle marsh. It had been an year since she rejected my proposal.. proposal to have her as a companion of my dreams. Nevertheless, a tiny hope still lived on inside me. When I couldn't talk my heart out in the right sense, I leaned to this turpitude and try to win her.

Silence embraced both of us for minutes.That meeting was auspicious to me and I was meeting my dream-mate. Those parrot-fashioned sentences which I mugged up to articulate in front of her were burned into ashes by acumen sight of her cold eyes. Those words started ringing in my ears... through which  she rejected my place making my words meaningless. My mind would not have turned so turbid if she had rebuked me... with anger, irritation. She placed my proposal away from her life silently, in cinema-tone saying, " You are a great friend of mine dear... " . Those words came and hit me again and again. I became diffident by thinking, ' Am I playing her character in my life... ??? ' . Words seldom got chance to traverse between us these days. Its through emotions that I tried to weigh her inside me. I opened up to her as a seashore which gets itself unfolded by staggering blow of mammoth waves... I leaned towards her... I spread out... But, she started to fold up and tried to live in the warmth of introversion. She blossomed silently inside the warmth of her own world. Now, she is sitting in front of me as a one who is in search of something ethereal.  

I continued... " Bought it from Khaadi Bhandar... the kurta... " . These words relentlessly flowed. I started to justify my social stand to make her feel that I am not trumpeting to attract her. I spoke against Mall-culture. I started unfolding myself as I went on speaking. " These are the ones responsible for empty tummies of my fellowmen... They use petty shopkeepers, farmers as steps to climb up.. literally stepping on them.. their life... and they grow big ... ". After uttering this small portion of political speech, I cautiously looked her face presuming she might think as, ' This guy is obscurantist... knows nothing about freshness... odour of life... '. But, her face was unmoved. It was the same emotionless one with bright eyes. Straightly, she arrowed me saying " I am not politically oriented... " Wombing the sigh of poor farmers... shopkeepers... , I saw her shiny 'bright' "Reebok" jersey , whose glare masked clothes of my poor countrymen.. Khadi.... I unsettled thinking that the gloating of these companies weighed more in the hearts of people. All of us hang to pretension... we pretend everywhere... everyday.. in front of neighbour, mate, stranger, beloved, enemy.. finally even in front of conscience, which questions our deportment.

'Did I played her part of acting in the play... in front of my conscience... ?'.... This question started haunting me. I knew the answer, but was not in a position to accept it. I masked myself again. She seemed to stand far away from me waving her hands... I looked down.. saw my watch... It was six o'clock .. Sun had already left the western sky strewing behind the red hue. "Let's start.. you bus will be here in 10 min.. ", she stood up saying so. I just nodded and gulped the last sip of coffee. We stepped out of the coffee outlet together. I asked her, " Marriage... ?? " thinking, ' This, probably, will be our last meet. She will fly away from the tree which gave her the warmth of being home. Can I put an end to the drama which is going on unstopped?? Can I kneel down infront of my conscience and confess... ?? ' .. Lot of questions started dancing around me. I was not in a position to cast them away. " If I dont get admission... it will be in December... " She replied. We came out of the institute walking, stepped in and sat in the bus.

Bus was about to start. " I have to look after a reaction ... good luck... ", whispering these lines, she calmly stood up and stepped out of the bus without even listening to my reply. All those words , which wanted to get liberated stalled deep inside my heart. My lips trembled. I riveted  my eyes to her back and watched her till her light blue coloured dress was absorbed by the darkness of night. I started trying to mask the void created by her absence. Again the same drama... me ,Kshama, conscience ... Conductor got into the bus and shouted, "Majestic... ". Bus started moving. Institute started to appear as if, it is moving away from me. My vision blurred. Night spread a veil on daylight.

Wednesday 23 September 2015

ಹಿಂದಿರುಗಿ ನೋಡಿದಾಗ ...

"ಅವಧಿ" ಯಲ್ಲಿ ಪ್ರಕಟವಾದ ನನ್ನ ಲೇಖನ 

ಹಿಂದಿರುಗಿ ನೋಡಿದಾಗ ... 

ಹೀಗೆಯೇ ಎಚ್ಚೆಸ್ವಿ ಅವರ "ಅನಾತ್ಮ ಕಥನ " ಓದುತ್ತಾ ಕುಳಿತಿದ್ದೆ. ಯಾವುದೊ ಸಣ್ಣ ಕಥೆಯ ಮಧ್ಯದಲ್ಲಿ ಅವರು ಯು. ಆರ್. ಅನಂತಮೂರ್ತಿಯವರ " ಸಂಸ್ಕಾರ " ಕಾದಂಬರಿಯ ಬಗ್ಗೆ ಉಲ್ಲೇಖಿಸಿದ್ದರು. ತಕ್ಷಣವೇ ಏನೋ ಹೊಳೆದಂತಾಗಿ ಇಂಟರ್ ನೆಟ್ನಲ್ಲಿ ಸಂಸ್ಕಾರ ಮೊದಲು ಬಿಡುಗಡೆ ಆದ ವರ್ಷ ಯಾವುದೆಂದು ಹುಡುಕಿದೆ. ವರ್ಷ ೧೯೬೫ ನೋಡಿದ ಕೂಡಲೇ ಮುಖದಲ್ಲೊಂದು ಮಂದಾಹಾಸ. ' ಅರೆ, ಸಂಸ್ಕಾರ ಮುದ್ರಣಗೊಂಡು ೫೦ ವರ್ಷ ಆಗಿಹೊಯ್ತಾ ?? ' ಎಂದುಕೊಂಡೆ. ತಕ್ಷಣವೇ ಇಂತಹದೊಂದು ಅದ್ಭುತ ಕಲಾಕೃತಿ ಸೃಷ್ಟಿಸಿದ ಮೇಷ್ಟ್ರ  ಬಗ್ಗೆ ಏನಾದರೂ ಬರೆಯಬೇಕೆಂಬ ಹಂಬಲ ಉಂಟಾಯಿತು. ನಾನು 'ಸಂಸ್ಕಾರ' ಓದಿದ್ದು ಇತ್ತೀಚೆಗೆ. ಅದನ್ನು ಓದಿ ಇನ್ನೂ ವರ್ಷವೂ ಕಳೆದಿಲ್ಲ. ಅನಂತಮೂರ್ತಿಯವರ ಕಟ್ಟಾ ಅಭಿಮಾನಿ ನಾನೇನೂ ಆಗಿದ್ದವನಲ್ಲ. ನನಗೆ ಗೊತ್ತಿದ್ದ ಸಾಹಿತ್ಯವೆಂದರೆ ಪೂ. ಚಂ. ತೇ ಯವರ ಕೆಲವು ಕಥೆಗಳು, ಮತ್ತು ಎಚ್ಚೆಸ್ವಿ ಯವರ ಕೆಲವು ಕವಿತೆಗಳು ಅಷ್ಟೇ. ಪುಣೆಗೆ ಬರುವ ಮುನ್ನ ಸಾಹಿತ್ಯದ ಬಗ್ಗೆ ಒಲವಿದ್ದರೂ ಓದುವ ಹಂಬಲವಂತೂ ಇರಲಿಲ್ಲ.

ರಾತ್ರಿ ಸುಮಾರು ೮ ಘಂಟೆ ಆಗಿದ್ದಿರಬಹುದು, ಅಮ್ಮ ಫೋನ್ ಮಾಡಿದವರು, " ಲೋ .. ಅನಂತಮೂರ್ತಿ ಹೋಗ್ಬಿಟ್ರಂತೆ ಕಣೋ ... " ಎಂದರು. ನಾನೂ ಅದನ್ನೇನು ಬಹಳ ಹತ್ತಿರವಾಗಿ ಸ್ವೀಕರಿಸದೇ , " ಹೌದಾ ... "ಎಂದಷ್ಟೇ ಉತ್ತರಿಸಿ ಫೋನಿಟ್ಟಿದ್ದೆ . ಆಮೇಲೆ ಯಾವಾಗಲೋ ಹೀಗೆಯೇ ಯೂಟ್ಯೂಬಿನಲ್ಲಿ ಏನೋ ಹುಡುಕುತ್ತಾ ಇದ್ದಾಗ ಅಕಸ್ಮಾತಾಗಿ ಸಿಕ್ಕ ಅನಂತಮೂರ್ತಿಯವರ ಒಂದು ವೀಡಿಯೋ ನೋಡಿದೆ. ಭಾರತದ ಫಿಲಮ್ಸ್ ಡಿವಿಷನ್ ರ ಆ ವೀಡಿಯೊ ನೋಡಿ, ಅನಂತಮೂರ್ತಿ ಎಂದರೆ ಏನೋ ಒಂದು ರೀತಿಯ ಆತ್ಮೀಯ ಭಾವನೆ ಹುಟ್ಟತೊಡಗಿತ್ತು. ' ಈ ಮನುಷ್ಯ ಮಾತನಾಡುವ ರೀತಿ ನೋಡಿದರೆ , ಬಹಳ ಭಾವುಕ ಎಂದೆನುಸುತ್ತೆ. ಒಮ್ಮೆ ಇವರ ಯಾವುದಾದರೂ ಕೃತಿ ಓದಬೇಕಲ್ಲಾ ... ' ಎಂದುಕೊಂಡೇ ಸಪ್ನ ಆನ್ ಲೈನ್ ನಲ್ಲಿ ತರಿಸಿಕೊಂಡದ್ದು 'ಸಂಸ್ಕಾರ'. ತರಿಸಿಕೊಂಡದ್ದಷ್ಟೇ ...  ಬಹಳ ದಿನ ನನ್ನ ಮೇಜಿನ ಒಂದು ಮೂಲೆಯಲ್ಲಿಯೇ ಕುಳಿತಿತ್ತು ಪುಸ್ತಕ. ಓದುವ ಮನಸೂ ಆಗಿರಲಿಲ್ಲ, ಸಮಯವೂ ಸಿಕ್ಕಿರಲಿಲ್ಲ. ಇದ್ದಕ್ಕಿದ್ದಂತೆ ಹಾಸನಕ್ಕೆ ಹೊರಡುವ ಪ್ರಮೇಯವೊಂದು ಒದಗಿಬಂತು. ಬಸ್ಸಿನ ದಾರಿ ಖರ್ಚಿಗೆಂದು ವೀಡಿಯೊ ಮೊಬೈಲ್ ಗೆ  ಹಾಕಿಕೊಳ್ಳೋಣ ಎಂದು ಲ್ಯಾಪ್ ಟಾಪ್ ಬಿಚ್ಚಿಟ್ಟವನಿಗೆ ಮೇಜಿನ ಮೇಲೆ ಧೂಳಲ್ಲಿ ಅದ್ದ " ಸಂಸ್ಕಾರ" ಕಾಣಿಸಿತು. ' ಈ ಬಾರಿ ಪುಸ್ತಕ ದಾರಿ ಖರ್ಚಿಗೆ... '  ಎಂದುಕೊಂಡು  'ಸಂಸ್ಕಾರ' ವನ್ನು ಬ್ಯಾಗಿಗೆ ಹಾಕಿಕೊಂಡೆ.

ಅರಸೀಕೆರೆಯಿಂದ ಹಾಸನಕ್ಕೆ ಪಯಣಿಸುವ ಒಂದೂವರೆ ಘಂಟೆ ಅವಧಿಯಲ್ಲೇ ಸಂಸ್ಕಾರದ ೫೦ ಪುಟಗಳನ್ನು ಓದಿ ಮುಗಿಸಿಬಿಟ್ಟೆ. ಎಷ್ಟರ ಮಟ್ಟಿಗೆ 'ಸಂಸ್ಕಾರ' ನನ್ನನ್ನು ಆವರಿಸಿಕೊಂಡುಬಿಟ್ಟಿತು ಎಂದರೆ, ಇದಾದ ಮೇಲೆ ಮೇಷ್ಟ್ರ ಎಲ್ಲಾ ಸಣ್ಣ ಕಥೆಗಳನ್ನೂ , ಅವರ ಕಾದಂಬರಿಗಳನ್ನೂ ಮೂರು ತಿಂಗಳೊಳಗೆ ಕೊಂಡು ಓದಿ ಬಿಟ್ಟೆ. ಸಮಾಜ ಮತ್ತು ವ್ಯಕ್ತಿಯ ನಡುವೆ ನಿಂತು ಕಥೆ ಹೆಣೆಯುವ ಮೇಷ್ಟ್ರ ಕಥಾಶೈಲಿ ನನ್ನ ಮನಸ್ಸಿನ ಮೇಲೆ ಅತ್ಯಂತ ಆಳವಾಗಿ ಪ್ರಭಾವ ಬೀರಿತು. ಕನ್ನಡ ನವ್ಯ ಸಾಹಿತ್ಯದ ನೆಲೆಗಟ್ಟಿನಲ್ಲಿ ಸಾಹಿತ್ಯಿಕವಾಗಿ ಬಹಳ ಜತನದಿಂದ , ನಾಜೂಕಿನಿಂದ ಬಚ್ಚಿಟ್ಟಿದ್ದ ಹಲವಾರು ವಿಚಾರಗಳ ಬಗ್ಗೆ ಬರವಣಿಗೆ ಹೊಮ್ಮಿತು. ಈ ನಿಟ್ಟಿನಲ್ಲಿ 'ಸಂಸ್ಕಾರ' ಒಂದು ಬಹಳ ಮುಖ್ಯ ಕೃತಿ. ವೈಯಕ್ತಿಕ ಆಸೆಗಳು, ಮತ್ತು ಹೊರಗಿನ ಪ್ರಪಂಚಕ್ಕಾಗಿ ಹಾಕುವ ಮುಖವಾಡಕ್ಕೆ ನೈತಿಕವಾಗಿ ಏರ್ಪಡುವ ತಿಕ್ಕಾಟವನ್ನು ಬಹಳ ಸೂಕ್ಷ್ಮವಾಗಿ ಬಿಂಬಿಸುತ್ತೆ. ಈ ತರಹದ 'ಇಬ್ಬಂದಿ'ತನ ಮೇಷ್ಟ್ರ ಸಾಹಿತ್ಯದ ಒಂದು ಬಲವಾದ ಅಭಿವ್ಯಕ್ತಿಯಾಗಿ ಬಂದಿರುವುದನ್ನು ನಾವು ಕಾಣಬಹುದು. 'ಸಂಸ್ಕಾರ' ದ ಹಿಂದೆ ಪ್ರಕಟವಾದ ಅವರ ಸಣ್ಣ ಕಥೆಗಳಲ್ಲೂ ಈ ವಿಚಾರ ವಿದಿತ. ಅವರ "ಖೋಜರಾಜ ", " ಪ್ರಶ್ನೆ", "ಕಾರ್ತೀಕ", "ಘಟಶ್ರಾದ್ಧ"  ಮತ್ತು ಅದರ ನಂತರ ಹೊರ ಬಂದ "ಸೂರ್ಯನ ಕುದುರೆ " ಯಲ್ಲೂ ಬಹಳ ಶ್ರೇಷ್ಠವಾಗಿ ಹೊರಹೊಮ್ಮಿದೆ. ನಂಬಿಕೆ ಮತ್ತು ಆಚರಣೆಯ ತೊಡಕಿನಲ್ಲೇ ಸಿಕ್ಕಿಹಾಕಿಕೊಳ್ಳುವನು ಪ್ರಾಣೇಶಾಚಾರ್ಯ. ಅಂದಿನ ಸಾಮಾಜಿಕ ವ್ಯವಸ್ಥೆ, ಪ್ಲೇಗ್ ತರಹದ ಖಾಯಿಲೆಗಳು ಮತ್ತು ಅದರಂತೆಯೇ ಜನರ ಜೀವಾಳದಲ್ಲಿ ಬಿಗಿ ಬೇರು ಬಿಟ್ಟಿದ್ದ ಜಾತಿ ವ್ಯವಸ್ಥೆಯನ್ನು ಒಂದೇ ತಕ್ಕಡಿಯಲ್ಲಿ ತೂಗುವ ಅದ್ಭುತ ಸಮೀಕರಣೆ 'ಸಂಸ್ಕಾರ'ದ್ದು. ಪ್ರಾಣೇಶಾಚಾರ್ಯನ ಪಾತ್ರ, ಸಿಕ್ಕರೂ ಸಿಗದ ಒಂದು ದಿವ್ಯಕ್ಕೆ ಧ್ಯಾನಸ್ಥನಾಗಿ ಕೂರುವ ಸನ್ಯಾಸಿಯಂತೆ ತೋರುತ್ತದೆ. ಎಲ್ಲವನ್ನೂ ಬಿಟ್ಟುಬಿಡುವೆ ಎನ್ನುವ ಹುಚ್ಚು ಧೈರ್ಯ, ಸಮಾಜದ ಎಲ್ಲ ಕಟ್ಟುಪಾಡುಗಳನ್ನು ಕಿತ್ತೆಸೆಯುತ್ತೇನೆ ಎನ್ನುವ ಮನೋಧೈರ್ಯ ಎಲ್ಲವನ್ನೂ ಮೇಳೈಸಿಕೊಂಡೇ , ಅದರ ಬಗ್ಗೆಯೂ ಮತ್ತೊಮ್ಮೆ ಅನುಮಾನದ ದೃಷ್ಟಿ ಬೀರುವ ಪಾತ್ರ ಮೇಷ್ಟ್ರ "ಸ್ವ" ಚಿಂತನೆಯ ಫಲವಿದ್ದಿರಬಹುದೋ ಏನೋ !!!

ಸಾಹಿತ್ಯಿಕವಾಗಿ ನೋಡಿದಾಗ 'ಸಂಸ್ಕಾರ' ಹೊಸ ರೀತಿಯ ಕಥೆಗಾರಿಕೆಯನ್ನು ಕನ್ನಡಕ್ಕೆ ತಂದ ಕೃತಿ ಎನ್ನಬಹುದು. ಆ ಹಿಂದೆ ಬಂದಿದ್ದ ಯಾವುದೇ ಕೃತಿಗಳು, ಸಮಾಜದ ಕೊಳಕು ವ್ಯವಸ್ಥೆಯನ್ನೂ, ಅದರೊಂದಿಗೆ ದಾರ್ಶನಿಕ ತತ್ವಜ್ಞಾನವನ್ನು ಒಂದೇ ತಟ್ಟೆಯಲ್ಲಿ ಉಣಬಡಿಸಿದ್ದಿಲ್ಲ. ಆ ಕೆಲಸವನ್ನು ಬಹಳ ಒಪ್ಪವಾಗಿ 'ಸಂಸ್ಕಾರ' ದಲ್ಲಿ ಮೇಷ್ಟ್ರು ಮಾಡಿದರು. ಅದರಲ್ಲಿನ ವೈಚಾರಿಕ ಶ್ರೇಷ್ಠತೆ ಎಷ್ಟು ಆಳವಾಗಿತ್ತು ಎಂದರೆ, ಮುಂದಿನ ಹಲವಾರು ಪೀಳಿಗೆಯವರು ಅದರಿಂದ ಪ್ರಭಾವಿತರಾಗಿದ್ದು ಸುಳ್ಳಲ್ಲ. ಮೇಷ್ಟ್ರು ತಮ್ಮ ನಂತರದ ಕೃತಿಗಳಲ್ಲಿ  ಇಷ್ಟು ಪ್ರಭಾವ ಬೀರಲಿಲ್ಲವಾದರೂ , "ಸೂರ್ಯನ ಕುದುರೆ"ಯಂತಹ ಅದ್ಭುತ ಸಣ್ಣಕಥೆಗಳನ್ನು ಸೃಷ್ಟಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ, ಹೇಳಬೇಕು ಎನಿಸಿದ್ದನ್ನು ಬಹಳ ನೇರವಾಗಿ ಹೇಳುವ ಅವರ ಕಥನ ಶೈಲಿ, ಮತ್ತು ವಿಚಾರವನ್ನು ಬಿಡಿಸಿಡುವ ರೀತಿ , ಆಂಗ್ಲ ಕಥೆಗಾರ ಲಾರೆನ್ಸನ ನೆನಪು ತರಿಸುತ್ತೆ.

ಸಮಾಜಮುಖಿಯಾಗಿ ತಮ್ಮನ್ನು ತೆರೆದುಕೊಳ್ಳುವ ಆಕಾಂಕ್ಷೆಯಲ್ಲಿ ಅವರ ಕಥೆಗಳ ರೀತಿಯೂ ಬದಲಾಯಿತು ಎಂದೇ ಹೇಳಬೇಕು. ಅವರ ನಂತರದ ರಚನೆಗಳಾದ "ಆಕ್ರಮಣ " , " ರೂತ್ ಮತ್ತು ರಸುಲ್ " ಇವೆಲ್ಲವೂ ಅವರ ರಾಜಕೀಯ ದೃಷ್ಟಿಯಿಂದ ಹೊಸಥರದವು ಎನ್ನಿಸಿದರೂ ಒಬ್ಬ ಸಾಮಾನ್ಯ ಓದುಗನಿಗೆ ಮುಟ್ಟುವುದು ಕಷ್ಟಸಾಧ್ಯವೇ. ಅವರ "ಅವಸ್ಥೆ", ಯೂ ಅದೇ ದಾರಿಯದ್ದು. ಆ 'ಇಬ್ಬಂದಿ'ತನ ಎಷ್ಟರ ಮಟ್ಟಿಗೆ  ಅವರ ಮನಸ್ಸಿನ ಧ್ಯಾನಕೇಂದ್ರವಾಗಿತ್ತೆಂದರೆ ಅವರು ಪೂರ್ವ ಮತ್ತು ಪಶ್ಚಿಮ ದ ವ್ಯತ್ಯಾಸವನ್ನೂ "ಕ್ಲಿಪ್ ಜಾಯಿಂಟ್" ಅಲ್ಲಿ ಬರೆದರು. "ಮೌನಿ"ಯಲ್ಲಿ ಯೋಚನೆ ಮತ್ತು ಕ್ರಿಯೆಯ ನೈತಿಕ ತಿಕ್ಕಾಟವನ್ನು ವರ್ಣಿಸಿದರು, "ಭವ" ದಲ್ಲಿಯೂ "ದಿವ್ಯ" ದಲ್ಲಿಯೂ ... ಹೀಗೆ ಆಂತರಿಕ ತಿಕ್ಕಾಟವನ್ನು ಮತ್ತು ಅದರ ಹೊರಗಿನ ಅಭಿವ್ಯಕ್ತಿಯನ್ನು ಸಮೀಕರಿಸಿ ನೋಡುವ ದೃಷ್ಟಿ ಇವರ ಎಲ್ಲ ಕೃತಿಗಳಲ್ಲೂ ಕಂಡುಬರುತ್ತೆ. ಆದ್ದರಿಂದಲೇ ನನ್ನ ಅತ್ಯಂತ ಇಷ್ಟದ ಹತ್ತು ಕಥೆಗಳು ಎಂದು ನಾನೇನಾದರೂ ಎಣಿಸಲು ಹೊರಟರೆ, ಅದರಲ್ಲಿ ಮೇಷ್ಟ್ರ "ಘಟಶ್ರಾದ್ಧ ", " ಸಂಸ್ಕಾರ" ಮತ್ತು ಪೂ. ಚಂ. ತೇ ಯವರ " ತಬರನ ಕಥೆ " ಇಲ್ಲದೆ ಆ ಲಿಸ್ಟ್ ಸಂಪೂರ್ಣ ಆಗುವುದೇ ಇಲ್ಲ. ಸಮಾಜಮುಖಿಯಾಗಿ ಬದುಕಬೇಕಾದವನು ಪ್ರಶ್ನೆ ಕೇಳದೇ ಯಾವ ವಿಷಯವನ್ನೂ ಒಪ್ಪಬಾರದು  ಎನ್ನುವ ಬಹಳ ಉತ್ತಮ ಮಾರ್ಗ ಹಾಕಿಕೊಟ್ಟ ಮೇಷ್ಟ್ರು ಇಂದು ನಮ್ಮೊಂದಿಗಿಲ್ಲ. ಅವರೇ ಹೇಳುವಂತೆ , " ಒಂದು ಕಾಲವನ್ನು ಬದುಕಿಸಿಡುವ ಕಾಯಕಕ್ಕೆ ನಾವು ಬರೆಯಬೇಕು .. ". ಚಿಂತನಪರ ಸಮಾಜವನ್ನು ಜೀವಂತವಾಗಿರಿಸಿ,  ಬದುಕಿಸಿಟ್ಟ ಅವರ ಕಥೆಗಳು ಇನ್ನೂ ಅವರ ಇರವನ್ನು ನಮ್ಮ ಎದೆಯಾಳದಲ್ಲಿ ಮೂಡಿಸುತ್ತದೆ.  ಮೇಷ್ಟ್ರು ನಮ್ಮನ್ನು ಬಿಟ್ಟು ಹೋದ ರೀತಿ , ಈಗಲೂ ಮೇಳಿಗೆಯಿಂದ  ಅಗ್ರಹಾರಕ್ಕೆ ಗಾಡಿ ಹತ್ತಿ ತಣ್ಣಗೆ ಮಾತನಾಡುತ್ತಲೇ ಹೋದ ಪ್ರಾಣೇಶಾಚಾರ್ಯರ ನೆನಪನ್ನು ತರಿಸದೇ ಇರುವುದಿಲ್ಲ.

Happy 50th anniversary  to "ಸಂಸ್ಕಾರ" ... 

Sunday 13 September 2015

ಅವಶೇಷ

"ಅವಧಿ" ಮತ್ತು "ರೀಡೂ" ನಲ್ಲಿ ಪ್ರಕಟವಾದ ನನ್ನ ಸಣ್ಣಕಥೆ .... 

ಅವಶೇಷ 

ಯಾವಾಗಲೂ ಗಿಜಿಗುಡುತ್ತಿದ್ದ ದೇರಣ್ಣನ ಚಾ ಅಂಗಡಿ, ಅಂದೇಕೋ ಬಿಮ್ಮೆಂದು ಕೂತಿತ್ತು. ಅಂಗಡಿಯೆಂದರೆ ನಾಲ್ಕು ಮೇಜುಗಳು, ಅದಕ್ಕೆ ಒತ್ತೊತ್ತಾಗಿ ಇಟ್ಟಿರುವ ಎಂಟು ಕುರ್ಚಿಗಳು, ಒಂದೆರಡು ಗಾಜಿನ ಡಬ್ಬಿ . ಅದರಲ್ಲಿ ಪೆಪ್ಪೆರ್ಮೆಂಟು, ಹಾಲ್ಕೊವ ಇತ್ಯಾದಿ. ಒಳಗೆ ದೇರಣ್ಣ ಕುಳಿತುಕೊಳ್ಳಲು ಒಂದು ಕುರ್ಚಿ, ಒಂದು ಮೇಜು. ಚಾ ಕಾಯಿಸುವ ಪಾತ್ರೆ ಇತ್ಯಾದಿ...  ಹತ್ತಾರು ಜನ ಗಿರಾಕಿಗಳು , ಅವರ ಚಿಟ-ಪಟ ಮಾತುಗಳು , " ನಂಗೊಂದು ಕಾಫಿ .. " , " ಎರಡ್ ಪ್ಲೇಟ್ ಇಡ್ಲಿ ಹಾಕು ದೇರಣ್ಣ .. " ಎಂದು ಕೇಳಿ ಬರುತಿದ್ದ ಯಾವುದೇ ಶಬ್ದಗಳ ಗೋಜಿರಲಿಲ್ಲ. ಸೂರ್ಯ ಬಾನಿನ ಅಂಚಲ್ಲಿ ಇಣುಕಿನೋಡಿ , ಮೈ ಮುರಿದು, ನಿಧಾನಕ್ಕೆ ನಡೆದು ಬಾನಿನ ಮೇಲೆ ಬಂದಾಗಲೂ ದೇರಣ್ಣನ ಅಂಗಡಿ ನಿದ್ರಿಸುತ್ತಲೇ ಇತ್ತು. ಎದುರಿಗೆ ಕರಿಯ ಕಂಬಳಿಯಂತೆ ಚಾಚಿ ಮಲಗಿದ್ದ ರಸ್ತೆಯೂ ನಿದ್ದೆ ಹೋಗಿತ್ತು. ಆಗ್ಗೀಗೆ ರೊಯ್ಯೆಂದು ಹೋಗುವ ವಾಹನಗಳನ್ನು ಬಿಟ್ಟರೆ ಎಂದಿನ ಉತ್ಸಾಹ ಇರಲಿಲ್ಲ. ನೇಸರ ಮೂಡಣದಿ ಕೆಂಪು ಚೆಲ್ಲಿ , ಅದನ್ನು ಹೆಕ್ಕಿಕೊಂಡು ಬಾನಿನಲ್ಲಿ ಇಣುಕುವ ಮೊದಲೇ ಲವಲವಿಕೆಯ ಮದುವೆಮನೆಯಂತೆ ಆಗುತ್ತಿದ್ದ ಮಹಾನಗರಿ , ಇಂದೇಕೋ ದುಗುಡ - ದುಮ್ಮಾನಗಳಿಂದ ಕೂಡಿದ, ಮೌನ ಧರಿಸಿದ ಸುಂದರಿಯ ಮುಖದಂತೆ ಬಾಡಿತ್ತು. ಎಲ್ಲೆಲ್ಲೂ ಸ್ಮಶಾನ ಮೌನ. 

ದೇರಣ್ಣ ಅಂಗಡಿಯೊಳಗಿನಿಂದ ಹೊರಗೆ ಇಣುಕಿದ. ಗಾಢ ಮೌನದೊಂದಿಗಿನ ರಣ ಬಿಸಿಲು ಮುಖಕ್ಕೆ ರಾಚಿತು. ಎಲ್ಲೋ ದೂರದಲ್ಲಿ ಸುಟ್ಟ ಟೈರಿನ ವಾಸನೆ ಮೂಗಿಗೆ ಮೆಲ್ಲಗೆ ಬಡಿಯುತ್ತಿತ್ತು. ಬೆಳಗ್ಗಿನಿಂದ ಒಬ್ಬನೂ ಅಂಗಡಿಯ ಕಡೆ ಮುಖ ಕೂಡ ಹಾಕಿರಲಿಲ್ಲ. ಎದುರಿಗಿದ್ದ ಗಾರ್ಮೆಂಟ್ಸ್ ಫ್ಯಾಕ್ಟರಿಯವರೂ ಕೂಡ ಅಂದು ರಜೆ ಘೋಷಿಸಿದ್ದರು. ಎಲ್ಲರಿಗೂ ತಮ್ಮ ತಮ್ಮ ಜೀವ-ಜೀವನದ ಮೇಲೆ ಆಸೆಯಿರುವುದಿಲ್ಲವೇ ? ... ಹೌದು... ಅಂದು ಮಹಾನಗರ ಬಂದ್ . ಯಾವ ವಿಶೇಷತೆಗೆಂದು ಬಂದ್ ಆಚರಿಸಲಾಗುತ್ತಿದೆ ಎಂದು ದೇರಣ್ಣನಿಗೆ ತಿಳಿದಿರಲಿಲ್ಲ. ತಿಳಿದುಕೊಳ್ಳುವ ಗೋಜಿಗೆ ಹೋಗುವುದೂ ದೇರಣ್ಣನ ಮನಸ್ಥಿತಿಗೆ ಸಾಧ್ಯವಾಗುತ್ತಿರಲಿಲ್ಲ. ದಿನದ ಕೂಳಿಗೆ ಹೋರಾಡುವ ಮನಕ್ಕೆ ಹೊಟ್ಟೆಯ ಆರ್ತ ಧ್ವನಿ ಬಿಟ್ಟು ಬೇರೆ ಕೂಗು ಕೇಳುವುದು ಕಷ್ಟ ಸಾಧ್ಯ. ಪ್ರತಿದಿನ ಬೆಳಗ್ಗೆ ಆರು ಘಂಟೆಗೆ, ತನ್ನ ಕಬ್ಬಿಣದ ಸರಳನ್ನು ಎಳೆದುಕೊಂಡು , ಬಾಗಿಲನ್ನು ಮುಚ್ಚಿಕೊಂಡು ನಿದ್ರಿಸುತ್ತಿರುವ ತನ್ನ ಅಂಗಡಿಯನ್ನು ದೇರಣ್ಣ ಎಚ್ಚರಿಸುತ್ತಾನೆ. ಅನಂತರ ಮಧ್ಯಾಹ್ನ ಸುಮಾರು ಮೂರು ಘಂಟೆಗೊಮ್ಮೆ ಮನೆಯ ಮುಖ ನೋಡಿದರಷ್ಟೇ ಭಾಗ್ಯ. ಮತ್ತೆ ಮನೆ ಕಡೆ ಹೋಗುವುದು ನಿಷೆ ಆವರಿಸಿದ ಮೇಲೆಯೇ. ಐದು ಹಸಿದ ಹೊಟ್ಟೆಗೆ ಅನ್ನ ಹಾಕುವ ಕೈ ದೇರಣ್ಣ. ಅಂಗಡಿಯ ಕೆಲಸಕಾರ್ಯಗಳಲ್ಲಿ ಗಾಢವಾಗಿ ಮುಳುಗಿ ಹೋದರೂ , ಮಗಳ ಮದುವೆಗೆ ಬೀಗರು ಕೇಳಿರುವ ಒಡವೆಗಳು , ಛತ್ರ , ಅಪ್ಪನ ಖಾಯಿಲೆ, ಈ ತಿಂಗಳ ಮನೆ ಬಾಡಿಗೆ, ಹೆಂಡತಿಯ ಒಡವೆ ಗಿರವಿ ಇಟ್ಟಿರುವುದು, ಅದರ ಬಡ್ಡಿ, ಎಲ್ಲವೂ ಅಮೂರ್ತ ಭೂತಗಳಾಗಿ ದೇರಣ್ಣನ ಎದುರು ನೃತ್ಯ ಮಾಡುತ್ತವೆ. ಇವೆಲ್ಲದರ ಎದುರು ಅವನು ನಿತ್ಯವೂ ಹೋರಾಡುತ್ತಲೇ ಇರುತ್ತಾನೆ. 

ಮೇಜಿನ ಮೇಲೆ ಮೊಣಕೈ  ಊರಿ ಹೊರಗಿನ ನಿರ್ವಾತ ಪ್ರಪಂಚವನ್ನೊಮ್ಮೆ ದಿಟ್ಟಿಸಿದ ದೇರಣ್ಣ. ಅರ್ಧ ಖಾಲಿಯಾಗಿ ಉಳಿದಿರುವ ಪೆಪ್ಪರ್ಮೆಂಟಿನ ಡಬ್ಬಿಗಳು, ಬೆಳಿಗ್ಗೆಯೇ ಗಿರಾಕಿಗಳಿಗಾಗಿ ಕಾಯಿಸಿಟ್ಟಿದ್ದ ಚಾ , ಬೇಯಿಸಿಟ್ಟಿದ್ದ ಇಡ್ಲಿಗಳು ಎಲ್ಲವೂ ಒಂದು ವಿಚಿತ್ರ ರೀತಿಯ ಘಮ ಸೂಸಲಾರಂಭಿಸಿದ್ದುವು. ' ಅವು ಹಾಳಾಗಿ ಹೋಗುವುದಲ್ಲಾ ... ಅದರಿಂದಾಗುವ ನಷ್ಟ ಹೇಗೆ ತುಂಬಿಕೊಳ್ಳಲಿ ... ' ಎಂದು ಯೋಚಿಸುತ್ತಾ, 'ಯಾರಾದರೂ ಇತ್ತ ಸುಳಿಯಬಹುದೇನೋ ... ಸ್ವಲ್ಪವಾದರೂ ವ್ಯಾಪಾರ ಆಗಬಹುದೇನೋ ... ' ಎನ್ನುವ ಭರವಸೆಯೇ ದೇರಣ್ಣನ ಆ ದೃಷ್ಟಿಯ ಹಿಂದಿನ ಶಕ್ತಿಯಾಗಿತ್ತು. ಎಲ್ಲರೂ ನಾಳೆಯ ರಾಜಕುಮಾರರೇ ... ಇಂದಿಗಿಂತ ಹೆಚ್ಚು ನಾಳೆ ವ್ಯಾಪಾರವಾಗಬಹುದು... ನಾಳೆ ಇಂದಿಗಿಂತ ಒಳ್ಳೆಯ ಜೀವನ ನಮ್ಮದಾಗಬಹುದು ಎನ್ನುವುದು ಕೆಲ ಮಧ್ಯಮ ವರ್ಗದ ಆಶಾಬೆಳಕು.. 

ಬಿಸಿಲಿನ ಝಳಕ್ಕೂ, ಮಂದವಾಗಿದ್ದ ಅಂಗಡಿಯೊಳಗಿನ ಘಮಕ್ಕೂ ದೇರಣ್ಣನಿಗೆ ಜೋಂಪು ಹತ್ತಿದಹಾಗಾಯಿತು. ಮೇಜಿನ ಮೇಲೆ  ತನ್ನ ತಲೆಯೊರಗಿಸಿ ಕಣ್ಣು ಮುಚ್ಚಿದ. ನಿದ್ರಾದೇವಿ ಅವನನ್ನು ಆವರಿಸಿಕೊಳ್ಳಲು ತನ್ನ ಕೋಮಲವಾದ, ಮಬ್ಬು-ಮಬ್ಬಾದ ಬಲೆಯನ್ನು ಹರವಿಹಾಕುತ್ತಿರುವಾಗಲೇ "ಬಚಾವೋ ... ಬಚಾವೋ ... " ಎಂದು ಕಿರುಚಿಕೊಂಡಂತಹ ಧ್ವನಿಯಿಂದ ಅವನಿಗೆ ಎಚ್ಚರವಾಯಿತು. ದೇರಣ್ಣ ಗಾಬರಿಗೊಂಡ. ಕನಸೇನೋ ಎಂದುಕೊಂಡು ತನ್ನ ತಲೆ ಕೊಡವಿಕೊಂಡ. ತುಸು ಕ್ಷಣದ ನಂತರ ಮತ್ತದೇ ಪುನರಾವರ್ತನೆ ಆಯಿತು ಅದೇ ಜೋರಾಗಿ, ಕರ್ಕಶವಾಗಿ, ಆರ್ತತೆಯನ್ನು ಗರ್ಭೀಕರಿಸಿಕೊಂಡ ಕೀರಲು ಸ್ವರ. ದಿಗಿಲುಗೊಂಡ ದೇರಣ್ಣ , ಅಂಗಡಿಯಿಂದ ಹೊರಬಿದ್ದು ಅತ್ತಿತ್ತ ನೋಡಲಾರಂಭಿಸಿದ.

ತುಸು ದೂರದಲ್ಲಿ ಹೊಗೆಯು ತನ್ನ ಚಕ್ರಾಧಿಪತ್ಯ ಸಾಧಿಸಿತ್ತು. 'ಹೋ .. ಹೋ ..' ಎನ್ನುವ ಏರುದನಿಯ ಸ್ವರ ಕೇಳಲಾರಂಭಿಸಿತು. ಯಾರೋ ಆ ಮಬ್ಬಿನಿಂದ ದೇರಣ್ಣನತ್ತಲೇ ಓಡಿ ಬರುತ್ತಿದ್ದ. ಅವನ ಹಿಂದೆ ಗುಂಪು ಗುಂಪಾಗಿ ಜನ ಅವನನ್ನು ಓಡಿಸಿಕೊಂಡು ಬರುತಿದ್ದರು. ಅವರೆಲ್ಲ ಈ ವ್ಯಕ್ತಿಯನ್ನು ಅಟ್ಟಿಸಿಕೊಂಡು ಬರುತ್ತಿರುವುದು ಸ್ಪಷ್ಟ ಗೋಚರವಾಗಿತ್ತು. ಆ ವ್ಯಕ್ತಿಯ ಬಟ್ಟೆಯೆಲ್ಲಾ ರಕ್ತದಿಂದ  ತೊಯ್ದಿತ್ತು. ದೇರಣ್ಣ ಹೆದರಿದ. ಅವನ ಕಾಲುಗಳು ನಡುಗತೊಡಗಿದವು. ತಾನು ಎಲ್ಲಿದ್ದೇನೆ ಎನ್ನುವ ಅರಿವೂ ಅವಿನಿಗಾಗಲಿಲ್ಲ. ಕಾಲುಗಳು ತನ್ನ ಸ್ವಸ್ಥಾನ ಬಿಟ್ಟು ಹೋಗಲು ನಿರಾಕರಿಸುತ್ತಿದ್ದವು. ಅಟ್ಟಿಸಿಕೊಂಡು ಬರುತ್ತಿದ್ದವರ ಕೈಯಲ್ಲಿ ಹರಿತವಾದ ಮಚ್ಚು, ಕತ್ತಿಗಳಿದ್ದವು... ಹಾಕಿ ಸ್ಟಿಕ್ ಗಳಿದ್ದುವು. " ಎಳ್ಕಳೊ ಬಡ್ಡಿಮಗನ್ನಾ ... ನಮ್ಮೋರನ್ನೆಲ್ಲ ಹೊಡಿತಿದಾರೆ ಅವ್ರು .. ಸಿಕ್ಕಿರೋ ಈ ಮಗನ್ನ ಬಿಡಬಾರದು .. ", ಎಂದು ಗುಂಪಿನಿಂದ ಯಾರೋ ಕೋಗಿದ. ತಕ್ಷಣವೇ .. " ಕತ್ತರ್ಸೋ ...  ಬಾಡಿನೂ ಉಳಿಬಾರ್ದು  " ಎನ್ನುವ ಹತ್ತಾರು ಧ್ವನಿಗಳು ಮೊಳಗಿದುವು. ಆ ವ್ಯಕ್ತಿ ದೇರಣ್ಣನಿಗೆ ಹತ್ತಿರಾಗುತ್ತಿದ್ದ. ದೇರಣ್ಣನ ಎದೆಬಡಿತ ಜೋರಾಗತೊಡಗಿತು. ತುಟಿಗಳು ಅದುರಿದವು. ಕಿರುಚಿಕೊಳ್ಳಬೇಕು ಎಂದೆನಿಸಲು ಆರಂಭಿಸಿತು. ಆದರೆ ನಾಲಗೆ ಹೊರಡುತ್ತಿರಲಿಲ್ಲ. ಹಿಂದೆ ಬರುತ್ತಿದ್ದ ಗುಂಪು ತನ್ನ ಓಟದ ವೇಗ ಹೆಚ್ಚಿಸಿಕೊಳ್ಳುತ್ತಿತ್ತು. ವ್ಯಕ್ತಿ ಸುಸ್ತಾಗಿದ್ದ, ಕಾಲುಗಳು ಕುಂಟಲು ಆರಂಭವಾಗಿದ್ದುವು. ಅವನು ದೇರಣ್ಣನ ಹತ್ತಿರ ಬಂದೇ ಬಿಟ್ಟ. ದೇರಣ್ಣನ ಅಂಗಡಿಯ ಹೊಸ್ತಿಲ ಬಳಿಯೇ ಅವನ ಕಾಲಬಳಿ ಬಂದು ಧೊಪ್ಪನೆ ಬಿದ್ದ. ... ತನ್ನ ಅರ್ಧತೆರೆದ ಕಣ್ಣುಗಳಲ್ಲಿ ಮನದೊಳಗಿನ ಎಲ್ಲಾ ಭಯ, ನೋವು, ಸಂಕಟ ಕೂಡಿಕೊಂಡು , " ಭಾಯ್ .. ಬಚಾವೋ .. " ಎಂದಷ್ಟೇ ತೊದಲಿ ಎವೆ ಮುಚ್ಚಿದ.

ದೇರಣ್ಣ ಸ್ಥಂಭೀಭೂತನಾದ. ಅವನ ತಲೆಯೊಳಗೆ ಸಾವಿರ ಯೋಚನೆಗಳು ಹರಿದಾಡತೊಡಗಿದುವು. ' ಇವನ್ಯಾರು... ಯಾಕೆ ಇಷ್ಟು ಗಾಯಗೊಂಡಿದ್ದಾನೆ... ಏನಾಗಿದೆ .. ಇವನನ್ನು ಯಾಕೆ ಅಟ್ಟಿಸಿಕೊಂಡು ಬರುತಿದ್ದಾರೆ ... ' ಎಂದೆಲ್ಲಾ ಪ್ರಶ್ನೆಗಳು ಒಮ್ಮೆಲೇ ದೇರಣ್ಣನ ತಲೆ ತುಂಬಿದವು. ಗೊಂದಲದಲ್ಲಿದ್ದ ದೇರಣ್ಣನನ್ನು ಯಾರೋ ಎಳೆದು ಕೆಳಗೆ ಕೆಡವಿದರು. ಅಂಗಡಿಯಿಂದ ದೂರ ಬಿದ್ದ ದೇರಣ್ಣ. ಸಾವರಿಸಿಕೊಂಡು ತನ್ನ ಅಂಗಡಿಯತ್ತ ದೃಷ್ಟಿ ಬೀರಿದ. ಹತ್ತಾರು ಜನ ಅಂಗಡಿಯೊಳಗೆ ನುಗ್ಗಿ, ಗಾಜಿನ ಡಬ್ಬಗಳನ್ನು ಎತ್ತಿ ಆ ವ್ಯಕ್ತಿಯ ಮೇಲೆ ಬೀಸಿದರು. ಅದು ಒಡೆದು ಚೂರಾಯಿತು . ಅವನ ತಲೆಯಿಂದ ರಕ್ತ ಹರಿಯತೊಡಗಿತು. " ಒದಿ .. ಬಿಡಬೇಡ " ... " ಹೊಡಿ ... ", "ಕಡಿ ... " ಇವುಗಳ ಝೇಂಕಾರದಿಂದ ಇಡೀ ವಾತಾವರಣ ತುಂಬಿಹೋಯಿತು. ಗಿರಾಕಿಗಳಿಗೆಂದು ಇಟ್ಟಿದ್ದ ಇಡ್ಲಿ, ಚಾ ಎಲ್ಲವೂ ನೆಲದ ಮೇಲೆ ಬಿದ್ದು ಹೊರಳಾಡತೊಡಗಿದುವು. ಕುರ್ಚಿಗಳು ಕಾಲು ಮುರಿದುಕೊಂಡವು. ಬೆಳಗ್ಗೆ ದೇವರ ಫೋಟೋ ಮುಂದೆ ಹತ್ತಿಸಿಟ್ಟಿದ್ದ ದೀಪವೂ ಕೆಳಗೆ ಬಿದ್ದು ಆರಿ ಹೋಗಿ ಸಣ್ಣಗೆ ಹೊಗೆ ಸೂಸತೊಡಗಿತ್ತು. " ಮತ್ತೆ .. ನಮ್ ದೇವರ ಬಗ್ಗೆ ಮಾತಾಡಿದ್ರೆ .. ಬಿಡ್ತೀವಾ ... " ಎನ್ನುತ್ತಾ ಮಲಗಿದ್ದವನ ಹೊಟ್ಟೆಗೊಬ್ಬ ಜೋರಾಗಿ ಒದ್ದ. ಆ ವ್ಯಕ್ತಿಯ ಚಲನೆ ನಿಂತಿತು. ಅವನ ಆರ್ತ ಚೀರಾಟ ನಿಂತಿತು. ದೇರಣ್ಣ ತನ್ನ ಕನಸು, ತನ್ನ ಜೀವನ ತನ್ನ ಕಣ್ಣು ಮುಂದೆಯೇ ಒಡೆದುಹೊಗುವುದನ್ನು ನೋಡುತ್ತಾ ಕೂತ. ಸ್ವಲ್ಪ ಹೊತ್ತು ಚೀರಾಡಿದ ಗುಂಪು , ಮೆಲ್ಲಗೆ ಚದುರತೊಡಗಿತು. ದೇರಣ್ಣನ ಇರುವಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದಂತೆ ಅಲ್ಲಿ ಉಳಿದಿದ್ದ ಕುರ್ಚಿಗಳನ್ನೂ, ಮೆಜನ್ನೂ ಒದ್ದು ಧ್ವಂಸಗೊಳಿಸಿ ಗುಂಪು ಅಲ್ಲಿಂದ ನಿರ್ಗಮಿಸಿತು. ಮತ್ತೆ 'ಹೋ ... ' ಎನ್ನುತ್ತಾ ಮುಂದುವರೆಯಿತು.

ಮೆಲ್ಲಗೆ ಕುಳಿತಲ್ಲಿಂದ ದೇರಣ್ಣ ಎದ್ದ. ತನ್ನ ಅಂಗಡಿಯನ್ನೊಮ್ಮೆ ದಿಟ್ಟಿಸಿದ. ಆಗಸ ಮೇಘಗಳ ಸಾಲಿಂದ ಆವೃತವಾಯಿತು. ಕಡು ಕಪ್ಪು ಮೋಡಗಳು ತನ್ನ ಮಿಂಚಿನ ನಾಲಗೆಯನ್ನೊಮ್ಮೆ ಚಾಚಿ, ದೇರಣ್ಣನನ್ನು ನೋಡಿ ಬಿಕ್ಕಿದಂತೆ ಗುಡುಗಿ ವರ್ಷಾಭಿಷೇಕ ಆರಂಭಿಸಿದುವು. ದೇರಣ್ಣ ಮಳೆಯಲ್ಲಿ ತೊಯ್ಯುತ್ತಲೇ, ಆ ವ್ಯಕ್ತಿಯ ದೇಹವನ್ನು ನೋಡುತ್ತಾ ಉಸಿರುಗಟ್ಟಿ ಕುಕ್ಕುರು ಕೂತ. ಸುತ್ತಲೂ ಹೊಗೆಯ ಮಬ್ಬು ಕವಿದಿತ್ತು. ನಿರ್ಭಾವದ ಅವನ ಮುಖದ ಮೇಲೆ ಮಳೆಯ ಹನಿಗಳು ನಾಟ್ಯ ಆರಂಭಿಸಿದವು. ದೂರದಲ್ಲೆಲ್ಲೋ  ಕೂಗಾಡುವ ಶಬ್ದ , ಪೋಲಿಸ್ ಜೀಪಿನ ಸೈರನ್ ಶಬ್ದ ಕೇಳತೊಡಗಿತು. ದೇರಣ್ಣ ನಿರುಮ್ಮಳನಾಗಿ ಅವಶೇಷದೊಂದಿಗೆ ಒಂದಾಗಿಬಿಟ್ಟ.